ಸೋಮೇಶ್ವರ ವನ್ಯಜೀವಿ ಅಭಯಾರಣ್ಯವುಉಡುಪಿ ಜಿಲ್ಲೆಯಲ್ಲಿರುವ ೩೧೪ ಚದರ ಕಿ.ಮೀ ದೊಡ್ಡ ಸಂರಕ್ಷಿತ ವನ್ಯಜೀವಿ ಮೀಸಲು ಪ್ರದೇಶವಾಗಿದೆ. ಸೋಮೇಶ್ವರ ಪಶ್ಚಿಮ ಘಟ್ಟದ ​​ಕೆಳಭಾಗದಲ್ಲಿರುವ ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಲ್ಲಿದೆ. ಸೋಮೇಶ್ವರ ವನ್ಯಜೀವಿ ಅಭಯಾರಣ್ಯವು ಭಾರತದ ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿರುವ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವಾಗಿದೆ. ಅಭಯಾರಣ್ಯದೊಳಗೆ ನೆಲೆಗೊಂಡಿರುವ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದ ಪ್ರಧಾನ ದೇವರು ಸೋಮೇಶ್ವರ ನ ಹೆಸರಿನಲ್ಲಿ ಇದನ್ನು ಹೆಸರಿಸಲಾಗಿದೆ. ಅಭಯಾರಣ್ಯವು ಕರ್ನಾಟಕ ಅರಣ್ಯ ಇಲಾಖೆಯಿಂದ ನಡೆಸಲ್ಪಡುವ ಸೀತಾನದಿ ಪ್ರಕೃತಿ ಶಿಬಿರವನ್ನು ಹೊಂದಿದೆ. ಉಡುಪಿಯಿಂದ ಆಗುಂಬೆ ರಸ್ತೆಯು ಈ ವನ್ಯಜೀವಿ ಅಭಯಾರಣ್ಯದ ಮೂಲಕ ಹಾದುಹೋಗುತ್ತದೆ. ಅಭಯಾರಣ್ಯವನ್ನು ೧೯೭೪ ರಲ್ಲಿ ೩೪.೧೩ ಚದರ ಮೈಲಿ ವಿಸ್ತೀರ್ಣದೊಂದಿಗೆ ಸ್ಥಾಪಿಸಲಾಯಿತು.ಇದನ್ನು ೨೦೧೧ ರಲ್ಲಿ ಸಂಖ್ಯೆ: FEE302 FWL2011-() ಬೆಂಗಳೂರು, ದಿನಾಂಕ:೨೭-೧೨-೨೦೧೧ ಗೆಜೆಟ್ ಅಧಿಸೂಚನೆಯ ಮೂಲಕ ೧೨೧.೩೩ ಚದರ ಮೈಲಿಗೆ ವಿಸ್ತರಿಸಲಾಯಿತು. ವಿಸ್ತರಣೆಯ ನಂತರ ಅಭಯಾರಣ್ಯವು ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಉಡುಪಿ, ಕುಂದಾಪುರ, ಕಾರ್ಕಳ, ತೀರ್ಥಹಳ್ಳಿ ತಾಲೂಕುಗಳಲ್ಲಿ ವ್ಯಾಪಿಸಿದೆ. ಅಸ್ತಿತ್ವದಲ್ಲಿರುವ ಅಭಯಾರಣ್ಯಕ್ಕೆ ಬಾಳೆಹಳ್ಳಿ ಮೀಸಲು ಅರಣ್ಯ, ಆಗುಂಬೆ ಅರಣ್ಯ, ಸೋಮೇಶ್ವರ ಮೀಸಲು ಅರಣ್ಯ ಮತ್ತು ತೊಂಬಟ್ಟು ಮೀಸಲು ಅರಣ್ಯ ಪ್ರದೇಶಗಳನ್ನು ಸೇರಿಸುವ ಮೂಲಕ ಅಭಯಾರಣ್ಯವನ್ನು ವಿಸ್ತರಿಸಲಾಯಿತು. ವಿಸ್ತರಿತ ಅಭಯಾರಣ್ಯವು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ, ಶರಾವತಿ ವನ್ಯಜೀವಿ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ಒಳಗೊಂಡಿರುವ ಸಂರಕ್ಷಿತ ಪ್ರದೇಶದ ನಿರಂತರ ವಿಸ್ತರಣೆಯನ್ನು ರೂಪಿಸುತ್ತದೆ. ಸೀತಾನದಿ ಅಭಯಾರಣ್ಯದ ಮೂಲಕ ಹರಿಯುತ್ತದೆ. == ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಆಕರ್ಷಣೆಗಳು == ಪ್ರಾಣಿಗಳ ವೀಕ್ಷಣೆ: ನರಿ, ಕಾಡುಹಂದಿ, ಜಿಂಕೆ, ಕಾಡೆಮ್ಮೆ, ಕಾಡು ನಾಯಿಗಳು, ಕೋತಿಗಳು ಮತ್ತು ಲಂಗರ್‌ಗಳು ಇತ್ಯಾದಿ. ಪಕ್ಷಿ ವೀಕ್ಷಣೆ: ಮಕಾಕ್, ಅಳಿಲುಗಳು, ಮಂಗಟ್ಟೆ‌ಗಳು ಇತ್ಯಾದಿ. ಸರೀಸೃಪಗಳು ಮತ್ತು ನಿಶಾಚರ ಪ್ರಾಣಿಗಳು: ನಾಗರ ಹಾವು, ಕಪ್ಪೆಗಳು, ಇತರ ರೀತಿಯ ಸರೀಸೃಪಗಳು ಮತ್ತು ಕೀಟಗಳು ಸೋಮೇಶ್ವರ ಮೀಸಲು ಅರಣ್ಯದಲ್ಲಿ ಕಂಡುಬರುತ್ತವೆ. ಜಲಪಾತಗಳು ಮತ್ತು ನದಿ : ಸೀತಾನದಿ, ಅಗುಂಬೆ ಮತ್ತು ಜೋಗಿ ಗುಂಡಿ ಜಲಪಾತಗಳು, ಒನಕೆ ಅಬ್ಬಿ ಜಲಪಾತ, ಬರ್ಕಣ ಜಲಪಾತ, ಕೂಡ್ಲು ತೀರ್ಥ ಜಲಪಾತ ಇತ್ಯಾದಿ. ಆಗುಂಬೆ ಸೂರ್ಯಾಸ್ತದ ನೋಟ. ಸೋಮೇಶ್ವರ ವನ್ಯಜೀವಿ ಮೀಸಲು ಪ್ರದೇಶ ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. == ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ == ಈ ಸಂಶೋಧನಾ ಸೌಲಭ್ಯವನ್ನು ೨೦೦೫ ರಲ್ಲಿ ಹರ್ಪಿಟಾಲಜಿಸ್ಟ್ ಶ್ರೀ. ರೊಮುಲಸ್ ವಿಟೇಕರ್ ಅವರು ಸ್ಥಾಪಿಸಿದರು. ಈ ಸೌಲಭ್ಯವು ಆಗುಂಬೆಯ ಸಮೀಪದಲ್ಲಿದೆ ಮತ್ತು ಕಾಳಿಂಗ ಸರ್ಪದ ಮೇಲೆ ಟೆಲಿಮೆಟ್ರಿ ಆಧಾರಿತ ಯೋಜನೆಗಳನ್ನು ನಡೆಸುತ್ತದೆ. == ಹವಾಮಾನ == ಈಶಾನ್ಯ ಭಾರತದ ಚಿರಾಪುಂಜಿಗೆ ಹೋಲಿಸಿದರೆ ಆಗುಂಬೆಯು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುತ್ತದೆ. ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಮೀಸಲು ಅರಣ್ಯಗಳು ವಾರ್ಷಿಕ ಸರಾಸರಿ ೭೦೦೦ ಮಿಮೀ ಮಳೆಯನ್ನು ಪಡೆಯುತ್ತವೆ == ಇತರ ಪ್ರವಾಸಿ ಆಕರ್ಷಣೆಗಳು == ಆಗುಂಬೆ ಸೂರ್ಯಾಸ್ತಮಾನ ವೀಕ್ಷಣಾ ಸ್ಥಳ, ಬರ್ಕಾನ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿಗುಂಡಿ ಜಲಪಾತಗಳು ಹತ್ತಿರದ ಇತರ ಕೆಲವು ಪ್ರವಾಸಿ ಆಕರ್ಷಣೆಗಳಾಗಿವೆ. == ಉಲ್ಲೇಖಗಳು ==